ಈ ವರ್ಷದ ಮಾನ್ಸೂನ್ ಜೂನ್ 5 ರಿಂದ ಶುರುವಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಮೇ 27 ರಿಂದ ಮೇ 31ರ ವರೆಗೆ ದಕ್ಷಿಣ ಕನ್ನಡ, ಉಡುಪಿಯ ಕೆಲವು ಕಡೆ ಮಳೆ ಆಗುವ ಸಾಧ್ಯತೆ ಇದೆ. ಹಾಗೆಯೇ ಬೆಂಗಳೂರು ನಗರದಲ್ಲಿ ಕೂಡ ಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ ದೊರೆತಿದೆ.
ಮೈಸೂರು,ಮಂಡ್ಯ,ಚಾಮರಾಜನಗರ,ಹಾಸನ,ಕೊಡಗು, ಶಿವಮೊಗ್ಗ ಜಿಲ್ಲೆಯಲ್ಲಿ ಮಳೆ ಆಗುವ ಸಾಧ್ಯತೆ ಹೆಚ್ಚಿದೆ. ಮಲೆನಾಡಲ್ಲಿ ಸಾಧಾರಣ ಮಳೆ ಇರಲಿದೆ. ಉತ್ತರ ಒಳನಾಡಿನ ಪ್ರದೇಶಗಳಾದ ಬಾಗಲಕೋಟೆ, ಬೆಳಗಾವಿ,ಬೀದರ್,ಗದಗ ,ಹಾವೇರಿ, ಕೊಪ್ಪಳ,ಧಾರವಾಡ,ಕಲ್ಬುರ್ಗಿ, ಯಾದಗಿರಿ ಜಿಲ್ಲೆಯಲ್ಲಿ ಇಂದಿನಿಂದ ಮಳೆ ಬರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಹಾಗೆಯೇ ಚಿತ್ರದುರ್ಗ,ದಾವಣಗೆರೆ,ಬಳ್ಳಾರಿ,ವಿಜಯನಗರ,ತುಮಕೂರು ಜಿಲ್ಲೆಯಲ್ಲಿ ಸಂಜೆ ಗಾಳಿ ಮತ್ತು ಕೆಲವು ಕಡೆ ಮಳೆ ಆಗುವ ಸಾಧ್ಯತೆ ಇದೆ.
ಗುಡುಗು ಗಾಳಿ ಇರುವ ಸಮಯದಲ್ಲಿ ಮರ ಹಾಗೂ ವಿದ್ಯುತ್ ಕಂಬಗಳ ಅಡಿ ನಿಲ್ಲದೆ ಸುರಕ್ಷಿತ ಸ್ಥಳದಲ್ಲಿ ನಿಲ್ಲಲು ಸೂಚಿಸಲಾಗಿದೆ.









1 thought on “Yellow Alert ಮುಂದಿನ 3 ದಿನ ಮಳೆ ಸಾಧ್ಯತೆ”