ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಮಳೆ ತನ್ನ ಅಬ್ಬರವನ್ನು ಮುಂದುವರಿಸಿದ್ದು, ಮುಂದಿನ ಏಳು ದಿನಗಳ ಕಾಲ ಕರ್ನಾಟಕದ ವಿವಿಧ ಭಾಗಗಳಲ್ಲಿ ಗುಡುಗು, ಸಿಡಿಲು ಹಾಗೂ ಗಾಳಿಯೊಂದಿಗೆ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ರಾಜ್ಯದ ಹಲವೆಡೆ ಈಗಾಗಲೇ ಉತ್ತಮ ಮಳೆಯಾಗುತ್ತಿದ್ದು, ಮುಂದಿನ ದಿನಗಳಲ್ಲಿಯೂ ಮಳೆಯ ಚಟುವಟಿಕೆಗಳು ಮುಂದುವರಿಯುವ ನಿರೀಕ್ಷೆಯಿದೆ. ವಿಶೇಷವಾಗಿ ಕರಾವಳಿ ಜಿಲ್ಲೆಗಳಲ್ಲಿ ಜೂನ್ 15ರವರೆಗೆ ಗುಡುಗು-ಸಿಡಿಲಿನೊಂದಿಗೆ ಬಿರುಸಿನ ಗಾಳಿ ಬೀಸುವ ಸಾಧ್ಯತೆ ಇರುವುದರಿಂದ ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕೆಂದು ಇಲಾಖೆ ಸೂಚಿಸಿದೆ.
ಮುಂಗಾರು ಚುರುಕುಗೊಂಡಿರುವ ಹಿನ್ನೆಲೆಯಲ್ಲಿ ರೈತರು, ಮೀನುಗಾರರು ಹಾಗೂ ಸಾರ್ವಜನಿಕರು ಹವಾಮಾನ ಇಲಾಖೆಯ ಸೂಚನೆಗಳನ್ನು ಗಮನದಲ್ಲಿಟ್ಟುಕೊಂಡು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವುದು ಸೂಕ್ತವಾಗಿದೆ. ಇದನ್ನು ಓದಿ : ಕೊಡಗಿನಲ್ಲಿ ಭಾರಿ ವಾಹನಗಳಿಗೆ ತಾತ್ಕಾಲಿಕ ನಿರ್ಬಂಧ : ಜುಲೈ 9ರವರೆಗೆ ಜಿಲ್ಲಾಡಳಿತ ಆದೇಶ
ಬೆಂಗಳೂರಿನಲ್ಲಿ ತಂಪಾದ ವಾತಾವರಣ
ರಾಜಧಾನಿ ಬೆಂಗಳೂರಿನಲ್ಲಿ ಇಂದು ಗರಿಷ್ಠ ತಾಪಮಾನ 28 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ ತಾಪಮಾನ 22 ಡಿಗ್ರಿ ಸೆಲ್ಸಿಯಸ್ ದಾಖಲಾಗುವ ಸಾಧ್ಯತೆ ಇದೆ. ಮೋಡ ಕವಿದ ವಾತಾವರಣದೊಂದಿಗೆ ಮಳೆಯ ಸನ್ನಿವೇಶ ಮುಂದುವರಿಯುವ ನಿರೀಕ್ಷೆಯಿದೆ.
ಇದೇ ವೇಳೆ ಮಡಿಕೇರಿಯಲ್ಲಿ ಗರಿಷ್ಠ ತಾಪಮಾನ 24 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ ತಾಪಮಾನ 21 ಡಿಗ್ರಿ ಸೆಲ್ಸಿಯಸ್ ದಾಖಲಾಗುವ ಸಾಧ್ಯತೆ ಇದೆ. ಕೊಡಗು ಭಾಗದಲ್ಲಿ ತಂಪಾದ ವಾತಾವರಣ ಮುಂದುವರಿಯಲಿದೆ.
ಪ್ರಮುಖ ನಗರಗಳ ತಾಪಮಾನ ವಿವರ (ಗರಿಷ್ಠ/ಕನಿಷ್ಠ)
| ನಗರ | ತಾಪಮಾನ (°C) |
| ಬೆಂಗಳೂರು | 28 / 22 |
| ಮಂಗಳೂರು | 29 / 26 |
| ಶಿವಮೊಗ್ಗ | 29 / 23 |
| ಬೆಳಗಾವಿ | 30 / 23 |
| ಮೈಸೂರು | 29 / 23 |
| ಮಂಡ್ಯ | 29 / 22 |
| ಮಡಿಕೇರಿ | 24 / 21 |
| ರಾಮನಗರ | 29 / 22 |
| ಹಾಸನ | 27 / 22 |
| ಚಾಮರಾಜನಗರ | 29 / 23 |
| ಚಿಕ್ಕಬಳ್ಳಾಪುರ | 29 / 21 |
| ಕೋಲಾರ | 29 / 22 |
| ತುಮಕೂರು | 29 / 22 |
| ಉಡುಪಿ | 29 / 26 |
| ಕಾರವಾರ | 30 / 29 |
| ಚಿಕ್ಕಮಗಳೂರು | 25 / 20 |
| ದಾವಣಗೆರೆ | 32 / 24 |
| ಹುಬ್ಬಳ್ಳಿ | 31 / 24 |
| ಚಿತ್ರದುರ್ಗ | 31 / 23 |
| ಹಾವೇರಿ | 31 / 24 |
| ಬಳ್ಳಾರಿ | 34 / 25 |
| ಗದಗ | 32 / 23 |
| ಕೊಪ್ಪಳ | 34 / 24 |
| ರಾಯಚೂರು | 36 / 27 |
| ಯಾದಗಿರಿ | 37 / 27 |
| ವಿಜಯಪುರ | 36 / 25 |
| ಕಲಬುರಗಿ | 37 / 27 |
| ಬಾಗಲಕೋಟೆ | 34 / 24 |
ಹವಾಮಾನ ಇಲಾಖೆಯ ಸಲಹೆ
ಗುಡುಗು ಮತ್ತು ಸಿಡಿಲಿನ ಸಂದರ್ಭಗಳಲ್ಲಿ ತೆರೆದ ಪ್ರದೇಶಗಳಲ್ಲಿ ನಿಲ್ಲುವುದನ್ನು ತಪ್ಪಿಸಬೇಕು. ಭಾರೀ ಗಾಳಿ ಹಾಗೂ ಮಳೆಯ ಸಮಯದಲ್ಲಿ ಮರಗಳ ಕೆಳಗೆ ಆಶ್ರಯ ಪಡೆಯದಂತೆ ಸಾರ್ವಜನಿಕರಿಗೆ ಸೂಚಿಸಲಾಗಿದೆ. ಕರಾವಳಿ ಭಾಗದ ಜನರು ಹಾಗೂ ಮೀನುಗಾರರು ಹವಾಮಾನ ಮಾಹಿತಿ ಮೇಲೆ ನಿಗಾ ಇಡುವುದು ಅಗತ್ಯವಾಗಿದೆ.











1 thought on “ರಾಜ್ಯಾದ್ಯಂತ ಮುಂಗಾರು ಅಬ್ಬರ : ಮುಂದಿನ 7 ದಿನ ಗುಡುಗು ಸಿಡಿಲಿನೊಂದಿಗೆ ಮಳೆ ಸಾಧ್ಯತೆ, ಕರಾವಳಿಗೆ ವಿಶೇಷ ಎಚ್ಚರಿಕೆ”