ಮಂಗಳೂರು: ಮೈಸೂರಿನಿಂದ ಮಂಗಳೂರಿಗೆ ಕೆಎಸ್ಆರ್ಟಿಸಿ ಬಸ್ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರ ಬ್ಯಾಗ್ನಲ್ಲಿದ್ದ ಸುಮಾರು 35 ಗ್ರಾಂ ತೂಕದ ಚಿನ್ನದ ಮಾಂಗಲ್ಯ ಸರ ಹಾಗೂ ₹4,000 ನಗದು ಕಳುವಾಗಿರುವ ಕುರಿತು ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದೂರಿನ ಪ್ರಕಾರ, ಮೃದುಲಾ ಅವರು ತಮ್ಮ ಅಕ್ಕನೊಂದಿಗೆ ಜೂನ್ 26ರಂದು ರಾತ್ರಿ ಮೈಸೂರಿನಿಂದ ಕೆಎಸ್ಆರ್ಟಿಸಿ ಬಸ್ನಲ್ಲಿ ಮಂಗಳೂರಿನತ್ತ ಪ್ರಯಾಣ ಬೆಳೆಸಿದ್ದರು. ಪ್ರಯಾಣದ ವೇಳೆ ಅವರು 35 ಗ್ರಾಂ ತೂಕದ ಚಿನ್ನದ ಮಾಂಗಲ್ಯ ಸರ ಮತ್ತು ₹4,000 ನಗದನ್ನು ತಮ್ಮ ಬ್ಯಾಗ್ನಲ್ಲಿ ಸುರಕ್ಷಿತವಾಗಿ ಇರಿಸಿದ್ದರು.
ಜೂನ್ 27ರಂದು ಬೆಳಿಗ್ಗೆ ಸುಮಾರು 5.10 ಗಂಟೆಗೆ ಪಂಪ್ವೆಲ್ ವೃತ್ತದ ಬಳಿ ಬಸ್ನಿಂದ ಇಳಿದ ಬಳಿಕ, ಅಳಿಯನೊಂದಿಗೆ ನಂದಿಗುಡ್ಡೆಯಲ್ಲಿರುವ ಮಗಳ ಮನೆಗೆ ತೆರಳಿದ್ದರು. ಬಳಿಕ ಬ್ಯಾಗ್ ಪರಿಶೀಲಿಸಿದಾಗ ಅದರಲ್ಲಿ ಇರಿಸಿದ್ದ ಚಿನ್ನದ ಮಾಂಗಲ್ಯ ಸರ ಮತ್ತು ನಗದು ಕಾಣೆಯಾಗಿರುವುದು ಬೆಳಕಿಗೆ ಬಂದಿದೆ.
ಪ್ರಯಾಣದ ಅವಧಿಯಲ್ಲೇ ಅಪರಿಚಿತರು ಬ್ಯಾಗ್ನಿಂದ ಚಿನ್ನಾಭರಣ ಮತ್ತು ನಗದನ್ನು ಕಳವು ಮಾಡಿರುವ ಶಂಕೆಯನ್ನು ದೂರಿನಲ್ಲಿ ವ್ಯಕ್ತಪಡಿಸಲಾಗಿದೆ. ಕಳುವಾದ ಚಿನ್ನದ ಮಾಂಗಲ್ಯ ಸರದ ಮೌಲ್ಯ ಅಂದಾಜು ₹3.50 ಲಕ್ಷ ಎಂದು ತಿಳಿಸಲಾಗಿದೆ.
ಈ ಸಂಬಂಧ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಮತ್ತಷ್ಟು ಓದಿ :
ತಿಂಗಳಿಗೆ 40% ಲಾಭದ ಆಮಿಷ… ಮೈಸೂರಿನ ಉದ್ಯಮಿ ಸೇರಿದಂತೆ 7 ಮಂದಿಯಿಂದ 2 ಕೋಟಿ ರೂ. ವಂಚನೆ!













