ಮಂಗಳೂರು : ಜಾನುವಾರುಗಳನ್ನು ನಿಯಮಬಾಹಿರ ಹಾಗೂ ಹಿಂಸಾತ್ಮಕ ರೀತಿಯಲ್ಲಿ ಸಾಗಿಸುತ್ತಿದ್ದ ಲಾರಿಯನ್ನು ಕಾವೂರು ಪೊಲೀಸರು ಕೊಟ್ಟಾರ ಪ್ರದೇಶದಲ್ಲಿ ತಡೆದು ಪರಿಶೀಲನೆ ನಡೆಸಿ, ಅದರಲ್ಲಿದ್ದ 18 ಜಾನುವಾರುಗಳನ್ನು ರಕ್ಷಿಸಿದ್ದಾರೆ. ಈ ಪ್ರಕರಣದಲ್ಲಿ ಇಬ್ಬರನ್ನು ಬಂಧಿಸಿ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗಿದೆ.
ಬಂಧಿತರನ್ನು ಬೆಳಗಾವಿಯ ಕೆ.ಆರ್.ನಗರ ನಿವಾಸಿ ರಾಘವೇಂದ್ರ ಎಚ್.ಎಂ. (30) ಹಾಗೂ ಹಾಸನ ಮೂಲದ ಹೇಮಂತ್ ಕುಮಾರ್ (28) ಎಂದು ಗುರುತಿಸಲಾಗಿದೆ. ಇವರಲ್ಲಿ ರಾಘವೇಂದ್ರ ಲಾರಿ ಚಾಲಕರಾಗಿದ್ದು, ಹೇಮಂತ್ ಕುಮಾರ್ ಕ್ಲೀನರ್ ಆಗಿದ್ದರು.
ಪೊಲೀಸರ ಕಾರ್ಯಾಚರಣೆಯ ವೇಳೆ ಲಾರಿಯಲ್ಲಿದ್ದ ಎಲ್ಲಾ 18 ಜಾನುವಾರುಗಳನ್ನು ವಶಕ್ಕೆ ಪಡೆದು ಸುರಕ್ಷಿತವಾಗಿ ಗೋಶಾಲೆಗೆ ಸ್ಥಳಾಂತರಿಸಲಾಗಿದೆ.
ಪ್ರಾಥಮಿಕ ಮಾಹಿತಿಯ ಪ್ರಕಾರ, ಜಾನುವಾರುಗಳನ್ನು ಬೆಳಗಾವಿಯ ಸಂತೆ ಪ್ರದೇಶದಲ್ಲಿ ಖರೀದಿಸಿ, ಕೇರಳದ ಪಾಲಕ್ಕಾಡ್ಗೆ ಸಾಗಿಸಲಾಗುತ್ತಿತ್ತು ಎಂದು ತಿಳಿದುಬಂದಿದೆ.
ಪ್ರಕರಣ ದಾಖಲಿಸಿಕೊಂಡಿರುವ ಕಾವೂರು ಪೊಲೀಸರು ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಮುಂದಿನ ತನಿಖೆಯನ್ನು ಮುಂದುವರಿಸಿದ್ದಾರೆ.
ಮತ್ತಷ್ಟು ಓದಿ
ವಯನಾಡು ಭೂಕುಸಿತ ದುರಂತ : ಮತ್ತೆ ಮೂರು ಮೃತದೇಹಗಳು ಪತ್ತೆ; ಸಾವಿನ ಸಂಖ್ಯೆ 6ಕ್ಕೆ ಏರಿಕೆ
100 ದಿನಗಳಲ್ಲಿ ಹಣ ಡಬಲ್ ಆಗುತ್ತದೆ ಎಂದರು… ನಂಬಿದ ಯುವತಿ ₹6.42 ಲಕ್ಷ ಕಳೆದುಕೊಂಡರು!














1 thought on “ಮಂಗಳೂರು : ಅಕ್ರಮ ಜಾನುವಾರು ಸಾಗಾಟಕ್ಕೆ ಕಡಿವಾಣ; 18 ಜಾನುವಾರುಗಳ ರಕ್ಷಣೆ, ಇಬ್ಬರ ಬಂಧನ”