---Advertisement---

ಸಚಿವ ಸಂಪುಟ ವಿಸ್ತರಣೆ ಇಂದು ಸಂಜೆ 4 ಗಂಟೆಗೆ : 20 ಮಂದಿ ಸಚಿವರಾಗಿ ಪ್ರಮಾಣವಚನ

drusti news logo
On: August 3, 2026
ಕರ್ನಾಟಕ ಸಚಿವ ಸಂಪುಟ ವಿಸ್ತರಣೆಯಲ್ಲಿ 20 ನೂತನ ಸಚಿವರು ಪ್ರಮಾಣವಚನ
---Advertisement---

ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಹಲವು ದಿನಗಳಿಂದ ತೀವ್ರ ಕುತೂಹಲಕ್ಕೆ ಕಾರಣವಾಗಿದ್ದ ಸಚಿವ ಸಂಪುಟ ವಿಸ್ತರಣೆಗೆ ಇಂದು (ಆಗಸ್ಟ್ 3) ಸಂಜೆ 4 ಗಂಟೆಗೆ ಮುಹೂರ್ತ ನಿಗದಿಯಾಗಿದೆ. ಬೆಂಗಳೂರಿನ ಲೋಕಭವನದಲ್ಲಿ ನಡೆಯಲಿರುವ ಸಮಾರಂಭದಲ್ಲಿ 20 ಮಂದಿ ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ರಾಜ್ಯಪಾಲರ ಅನುಮೋದನೆಯೊಂದಿಗೆ ಪ್ರಮಾಣವಚನ ಕಾರ್ಯಕ್ರಮ ನಿಗದಿಯಾಗಿದೆ.

ಕಾಂಗ್ರೆಸ್ ಹೈಕಮಾಂಡ್ ಅಂತಿಮಗೊಳಿಸಿದ ಪಟ್ಟಿಯಂತೆ ಈ ಬಾರಿ 20 ಮಂದಿಗೆ ಸಚಿವ ಸ್ಥಾನ ದೊರೆತಿದೆ. ಈ ವಿಸ್ತರಣೆಯಲ್ಲಿ ಅನುಭವಿ ನಾಯಕರ ಜೊತೆಗೆ ಹೊಸ ಮುಖಗಳಿಗೂ ಅವಕಾಶ ನೀಡಲಾಗಿದೆ. ಪ್ರಾದೇಶಿಕ ಪ್ರಾತಿನಿಧ್ಯ, ಜಾತಿ ಸಮತೋಲನ ಹಾಗೂ ರಾಜಕೀಯ ಸಮೀಕರಣಗಳನ್ನು ಗಮನದಲ್ಲಿಟ್ಟುಕೊಂಡು ಪಟ್ಟಿಯನ್ನು ಸಿದ್ಧಪಡಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

  • ಪಿ.ಎಂ. ನಾರಾಯಣಸ್ವಾಮಿ
  • ಶಿವರಾಜ್ ತಂಗಡಗಿ
  • ರುದ್ರಪ್ಪ ಲಮಾಣಿ
  • ಟಿ. ರಘುಮೂರ್ತಿ
  • ಬಿ. ನಾಗೇಂದ್ರ
  • ಜಮೀರ್ ಅಹ್ಮದ್ ಖಾನ್
  • ರಿಜ್ವಾನ್ ಅರ್ಷದ್
  • ಸಂತೋಷ್ ಲಾಡ್
  • ಮಧು ಬಂಗಾರಪ್ಪ
  • ಪುಟ್ಟರಂಗ ಶೆಟ್ಟಿ
  • ಮಂಕಾಳ್ ವೈದ್ಯ
  • ಅಜಯ್ ಸಿಂಗ್
  • ಚೆಲುವರಾಯಸ್ವಾಮಿ
  • ಎಂ. ಶಿವಲಿಂಗೇಗೌಡ
  • ಹೆಚ್.ಸಿ. ಬಾಲಕೃಷ್ಣ
  • ಶಾಂತವೀರೇಗೌಡ
  • ವಿಜಯಾನಂದ ಕಾಶಪ್ಪನವರ್
  • ಲಕ್ಷ್ಮಣ್ ಸವದಿ
  • ಬಸವರಾಜ್ ರಾಯರೆಡ್ಡಿ

ಪ್ರಮಾಣವಚನದ ಬಳಿಕ ಸಚಿವರಿಗೆ ಖಾತೆ ಹಂಚಿಕೆ ನಡೆಯಲಿದ್ದು, ಯಾರಿಗೆ ಯಾವ ಖಾತೆ ಸಿಗಲಿದೆ ಎಂಬುದರತ್ತ ರಾಜ್ಯದ ರಾಜಕೀಯ ವಲಯದ ಗಮನ ನೆಟ್ಟಿದೆ.


ಮತ್ತಷ್ಟು ಓದಿ :

ಮತದಾರರ ಪಟ್ಟಿ ಪರಿಷ್ಕರಣೆ ಹೆಸರಲ್ಲಿ ₹3.49 ಲಕ್ಷ ಸೈಬರ್ ವಂಚನೆ! ECI ಅಧಿಕಾರಿ ಎಂದು ನಂಬಿಸಿ ಖದೀಮರ ಕೈಚಳಕ

drusti news logo

drustinews

Drusti News delivers timely, accurate, and reliable Kannada news covering local, state, national, and global events

Join WhatsApp

Join Now

Join Instagram

Join Now

1 thought on “ಸಚಿವ ಸಂಪುಟ ವಿಸ್ತರಣೆ ಇಂದು ಸಂಜೆ 4 ಗಂಟೆಗೆ : 20 ಮಂದಿ ಸಚಿವರಾಗಿ ಪ್ರಮಾಣವಚನ”

Leave a Comment