---Advertisement---

ಬಾಡಿಗೆ ಮನೆ ಕೇಳುವ ನೆಪದಲ್ಲಿ ಮನೆಗೆ ನುಗ್ಗಿ ದರೋಡೆ: ಉಳ್ಳಾಲದಲ್ಲಿ ವೃದ್ಧೆಯ ಚಿನ್ನಾಭರಣ ಕಳವು, 16 ಪೊಲೀಸರ ವಿಶೇಷ ತಂಡ ರಚನೆ

drusti news logo
On: August 5, 2026
ಉಳ್ಳಾಲದಲ್ಲಿ ಬಾಡಿಗೆ ಮನೆ ಕೇಳುವ ನೆಪದಲ್ಲಿ ವೃದ್ಧೆಯ ಚಿನ್ನಾಭರಣ ದರೋಡೆ
---Advertisement---

ಉಳ್ಳಾಲ, ಆ. 5: ಬಾಡಿಗೆ ಮನೆ ಬೇಕೆಂದು ಹೇಳಿ ಮನೆಗೆ ಪ್ರವೇಶಿಸಿದ ಇಬ್ಬರು ಅಪರಿಚಿತರು, ವೃದ್ಧೆಯೊಬ್ಬರ ಕುತ್ತಿಗೆಯಲ್ಲಿದ್ದ ಚಿನ್ನದ ಸರ ಹಾಗೂ ಕೈಯಲ್ಲಿದ್ದ ಬಳೆ ಕಸಿದು ಪರಾರಿಯಾದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ ಸಮೀಪದ ಮುಡಿಪು–ಕಾಯರ್‌ಗೋಳಿ ಪ್ರದೇಶದಲ್ಲಿ ನಡೆದಿದೆ. ಘಟನೆ ಸಂಬಂಧ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚಿಸಲಾಗಿದೆ.

ಕಾಯರ್‌ಗೋಳಿ ನಿವಾಸಿ ಭವಾನಿ ಆಚಾರ್ಯ (76) ದರೋಡೆಗೆ ಒಳಗಾದ ವೃದ್ಧೆ. ಬಾಡಿಗೆ ಮನೆ ಕುರಿತು ವಿಚಾರಿಸುವ ನೆಪದಲ್ಲಿ ಮನೆಗೆ ಬಂದ ಇಬ್ಬರು ವ್ಯಕ್ತಿಗಳು, ಸೂಕ್ತ ಅವಕಾಶ ನೋಡಿ ಅವರ ಮೈಮೇಲಿದ್ದ ಚಿನ್ನದ ಸರ ಹಾಗೂ ಕೈಬಳೆಯನ್ನು ಕಸಿದು ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ.

ಪ್ರಾಥಮಿಕ ಮಾಹಿತಿಯ ಪ್ರಕಾರ, ಆರೋಪಿಗಳು ಭವಾನಿ ಅವರ ಮನೆಗೆ ಬರುವ ಮೊದಲು ಸಮೀಪದ ಮತ್ತೊಂದು ಮನೆಗೂ ತೆರಳಿ ಬಾಗಿಲು ತಟ್ಟಿದ್ದರು. ಆ ವೇಳೆ ಮನೆಯವರು ಕಿಟಕಿಯಿಂದಲೇ “ನಮ್ಮಲ್ಲಿ ಬಾಡಿಗೆ ಮನೆ ಇಲ್ಲ” ಎಂದು ತಿಳಿಸಿದ್ದರೆಂದು ಹೇಳಲಾಗಿದೆ.

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ಸ್ಥಳದಲ್ಲಿ ಸಾಕ್ಷ್ಯ ಸಂಗ್ರಹಿಸಿದ್ದು, ಆರೋಪಿಗಳ ಪತ್ತೆಗೆ ಎಸಿಪಿ ವಿಜಯಕ್ರಾಂತಿ ನೇತೃತ್ವದಲ್ಲಿ 16 ಪೊಲೀಸರ ವಿಶೇಷ ತಂಡ ರಚಿಸಿ ವಿವಿಧ ಆಯಾಮಗಳಲ್ಲಿ ತನಿಖೆ ಮುಂದುವರಿಸಲಾಗಿದೆ.


ಮತ್ತಷ್ಟು ಓದಿ :

ಆ. 13ರಂದು ಕರ್ನಾಟಕ ಬಂದ್‌ಗೆ ವಾಟಾಳ್ ನಾಗರಾಜ್ ಕರೆ

drusti news logo

drustinews

Drusti News delivers timely, accurate, and reliable Kannada news covering local, state, national, and global events

Join WhatsApp

Join Now

Join Instagram

Join Now

1 thought on “ಬಾಡಿಗೆ ಮನೆ ಕೇಳುವ ನೆಪದಲ್ಲಿ ಮನೆಗೆ ನುಗ್ಗಿ ದರೋಡೆ: ಉಳ್ಳಾಲದಲ್ಲಿ ವೃದ್ಧೆಯ ಚಿನ್ನಾಭರಣ ಕಳವು, 16 ಪೊಲೀಸರ ವಿಶೇಷ ತಂಡ ರಚನೆ”

Leave a Comment